ಕರ್ನಾಟಕ ರಾಜ್ಯಕ್ಕೆ ವಲಸೆ ಬಂದು ನೆಲೆಸಿದವರಲ್ಲಿ ಶವಣ ಭಟ್ಟಾಚಾರ ಕೂಡ ಒಬ್ಬರು. ಆದರೆ ಅವರ ತೆರೆದ ಹೃದಯ ಮತ್ತು ಮುಕ್ತ ಮನಸ್ಸು ಅವರನ್ನು ಇತರ ವಲಸಿಗರಿಂದ ಭಿನ್ನವಾಗಿಸುತ್ತವೆ. ಅವರು ಈ ದೇಶದ ವೈವಿಧ್ಯತೆಯನ್ನು ಗೌರವಿಸುವ ಮನಸ್ಸುಳ್ಳ ನಿಜ ಭಾರತೀಯ. ಸಾಕಷ್ಟು ಜನ (ಭಾರತೀಯರಷ್ಟೇ ಅಲ್ಲ, ಬದಲಿಗೆ ಕೆಲ ವಿದೇಶಿಯರೂ ಸಹ) ಕರ್ನಾಟಕಕ್ಕೆ ವಲಸೆ ಬಂದಾಗ ಅಥವಾ ಕರ್ನಾಟಕಕ್ಕೆ ವಲಸೆ ಬರಲು ಯೋಜಿಸುತ್ತಿರುವಾಗ ಕನ್ನಡವನ್ನು ಕಲಿಯಬೇಕಾಗಿ ಬಂದಾಗ